Slide
Slide
Slide
previous arrow
next arrow

ಅ.10ಕ್ಕೆ “ಸೊಬಗಿನ ಶಿರಸಿ” ಪುಸ್ತಕ ಲೋಕಾರ್ಪಣೆ

300x250 AD

ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿರಸಿ ತಾಲೂಕಾ ಘಟಕದ ಆಶ್ರಯದಲ್ಲಿ ಅ.10 ರಂದು ಮಂಗಳವಾರ ಮಧ್ಯಾಹ್ನ 4-00 ಗಂಟೆಗೆ ಪಟ್ಟಣದ ಸಾಮ್ರಾಟ ಹೊಟೇಲಿನ ವಿನಾಯಕ ಸಭಾಂಗಣದಲ್ಲಿ ವಾಸುದೇವ ಶ್ಯಾನಭಾಗ ಅವರ “ಸೊಬಗಿನ ಶಿರಸಿ” ಎಂಬ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯ ಸಾಹಿತಿ ಗಣಪತಿ ಭಟ್ಟ ವರ್ಗಾಸರ ಸೊಬಗಿನ ಶಿರಸಿ ಎಂಬ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದು, ಕ.ಸಾ.ಪ ಶಿರಸಿ ಘಟಕದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಜಿ. ಸುಬ್ರಾಯ ಭಟ್ಟ ಬಕ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಹಾಗೂ ವಿಮರ್ಶಕ ಆರ್‌.ವಿ.ಹೆಗಡೆ ಆಲ್ಮನೆ ಪುಸ್ತಕದ ಪರಿಚಯ ಮಾಡಲಿದ್ದಾರೆ‌. ಜಗದೀಶ ಭಂಡಾರಿ, ರಾಜೇಶ ದೇಶಭಾಗ, ಡಿ.ಎಸ್.ನಾಯ್ಕ, ಸಾವಿತ್ರಿ ಶಾಸ್ತ್ರಿ ಉಪಸ್ಥಿತರಿರಲಿದ್ದಾರೆ. ಕೃಷ್ಣ ಪದಕಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

300x250 AD

ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೌರವ ಕಾರ್ಯದರ್ಶಿಗಳಾದ ವಾಸುದೇವ ಶಾನಭಾಗ, ಶ್ರೀನಿವಾಸ ನಾಯ್ಕ, ಗೌರವ ಕೋಶಾಧ್ಯಕ್ಷ ವಿ.ಆರ್.ಹೆಗಡೆ ಮತ್ತಿಘಟ್ಟಾ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top